ಘಾಚರ್ ಘೋಚರ್ ಎಂಬ ನೀಳ್ಗತೆಯು ಇತ್ತೀಚಿಗೆ ಬರೆದುದು ಮತ್ತು ಅದೆಲ್ಲಿಯೂ ಪ್ರಕಟವಾಗಿಲ್ಲ. ಈ ಜಗತ್ತಿನಲ್ಲಿ ಕೆಲವೇ ಜನರಿಗೆ ಮಾತ್ರ ಗೊತ್ತಿರುವ' ಘಾಚರ್ ಘೋಚರ್' ಎಂಬ ಶಬ್ದಯುಗಳದ ಅರ್ಥವನ್ನು ತಿಳಿಯಲು ಇರುವುದು ಒಂದೇ ಮಾರ್ಗವೆಂದರೆ ಈ ಕತೆ ಓದುವುದು! (ಮುನ್ನುಡಿಯಿಂದ)
ಕನ್ನಡದಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಕಾದಂಬರಿ ಗಲ್ಲೊಂದು ಘಾಚರ್ ಘೋಚರ್. ಆಧುನಿಕ ಬೆಂಗಳೂರು ನಗರದ ಜೀವನ ವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮ ವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ. (ಗಿರೀಶ್ ಕಾರ್ನಾಡರ ಬೆನ್ನುಡಿ ಯಿಂದ)
ಕೇವಲ ಸಾಂಸಾರಿಕ ರಗಳೆ ಅಥವಾ ಗೋಲುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿ ಬಿಡುತ್ತದೆ; ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಸಾಧ್ಯತೆ ಮತ್ತು ಕಷ್ಟಗಳ ಬಗೆಗಿನ ಧ್ಯಾನವಾಗಿ ಬಿಡುತ್ತದೆ.(ಟಿ.ಪಿ. ಅಶೋಕ್ ಅವರ ಬೆನ್ನುಡಿಯಿಂದ)
ಪುಸ್ತಕ: ಘಾಚರ್ ಘೋಚರ್
ಲೇಖಕ : ವಿವೇಕ ಶಾನಭಾಗ
ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು.
ಸಾಗರ. ಶಿವಮೊಗ್ಗ (ಜಿ)
( www.aksharaprakashana.com ನಲ್ಲಿ ಖರೀದಿಗೆ ಲಭ್ಯವಿದೆ.)
ಮಾಹಿತಿ ಸಂಗ್ರಹ: ಆದರ್ಶ ಜಯಣ್ಣ.
No comments:
Post a Comment